ನಾವೂ ಇದ್ದರೆ ನೀವು ಎಂದು ತನ್ನ ಸಾಮಾಜಿಕ ಜಾಲತಾಣದಲ್ಲಿ ಬಾಯಿಗೆ ಬಂದಂತೆ ಮಾತನಾಡಿ, ಕನ್ನಡಿಗರನ್ನು ಕೆಣಕಿದ್ದವರು ಸುಗಂಧ್ ಶರ್ಮಾ. ಕೋರಮಂಗಲದ ಪಬ್ಬು - ಕ್ಲಬ್ಬುಗಳಲ್ಲಿಯೇ ಎದ್ದು ಬಿದ್ದು ವಾಲಾಡುವಂತೆ ಕಾಣಿಸುವ ಸುಗಂಧ್ ಶರ್ಮಾ ತಾನು ಮಾಡಿದ ಈ ಪ್ರಮಾದದಿಂದ ಸದ್ಯ ಕೆಲಸವನ್ನೇ ಕಳೆದುಕೊಂಡಿದ್ದಾರೆ. ಬೆಂಗಳೂರಿನ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದ ವಿಡಿಯೋವನ್ನು ಡಿಲೀಟ್ ಮಾಡಿದ್ದಾರೆ. ತಿಪ್ಪೆ ಸಾರಿಸಲು ನನಗೆ ಬೆಂಗಳೂರು ಅಂದರೆ ಇಷ್ಟ, ಕನ್ನಡ ಅಂದರೆ ಇಷ್ಟ ಎಂದು ನುಲಿದಿದ್ದಾರೆ.